Monday, May 19, 2025
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಮದುವೆಗೆ ಒಪ್ಪಿದ್ದ ಮಹಿಳೆ ಚಿನ್ನದ ಜತೆ ಪರಾರಿ

ಮದುವೆಗೆ ಒಪ್ಪಿದ್ದ ಮಹಿಳೆ ಚಿನ್ನದ ಜತೆ ಪರಾರಿ

ಹೊಳೆಹೊನ್ನೂರು: ಪತ್ನಿ ಕಳೆದುಕೊಂಡ ನಂತರ ಮತ್ತೆ ಮದುವೆಯಾಗ ಬಯಸಿದ್ದ 60ರ ವಯೋಮಾನದ ವ್ಯಕ್ತಿಯೊಬ್ಬರು ಮದುವೆಯಾಗಲು ಒಪ್ಪಿಕೊಂಡಿದ್ದ ಮಹಿಳೆಯಿಂದಲೇ ವಂಚನೆಗೆ ಒಳಗಾಗಿದ್ದಾರೆ.

ಹೊಳೆಹೊನ್ನೂರಿನ ನಂಜುಂಡಪ್ಪ ಮೋಸ ಹೋದವರು.

ಘಟನೆ ವಿವರ: ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದು, 7 ತಿಂಗಳ ಹಿಂದೆ ಪತ್ನಿ ಕಳೆದುಕೊಂಡಿದ್ದ ಅವರಿಗೆ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆ ಮಾಡಿಕೊಳ್ಳಲು ಕನ್ನಡ ಮ್ಯಾಟ್ರಿಮೊನಿಯಲ್ಲಿ ಹೆಸರು ನೋಂದಾಯಿಸಿದ್ದರು. ಬೆಂಗಳೂರಿನ ಯಲಹಂಕದ ಚಂದ್ರಿಕಾ ಅನ್ನೋ ಮಹಿಳೆ ನಂಜುಂಡಪ್ಪ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ನ.15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಊಟ ಮಾಡಿ ಬರ್ತಿನಿ ಅಂತಾ ಹೋಗಿದ್ದ ಮಹಿಳೆ ಚಿನ್ನದ ತಾಳಿಯೊಂದಿಗೆ ಪರಾರಿಯಾಗಿದ್ದಾರೆ.

ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.