Monday, May 19, 2025
Homeಕಲ್ಯಾಣ ಕರ್ನಾಟಕವಿಜಯನಗರಕಾರ ಹುಣ್ಣಿಮೆ ಸಂಭ್ರಮ ಹೆಚ್ಚಿಸಿದ ಎತ್ತುಗಳ ಓಟ

ಕಾರ ಹುಣ್ಣಿಮೆ ಸಂಭ್ರಮ ಹೆಚ್ಚಿಸಿದ ಎತ್ತುಗಳ ಓಟ

ವಿಜಯನಗರ: ಕಾರ ಹುಣ್ಣಿಮೆ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಎತ್ತು ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ಮಲಪನಗುಡಿ, ಕೊಂಡನಾಯಕನಹಳ್ಳಿ, ಹೊಸೂರು, ಗಾದಿಗನೂರು, ಬೈಲುವದ್ದಿಗೇರಿ, ವಡ್ಡರಹಳ್ಳಿ, ಇಂಗಳಗಿ, ಬುಕ್ಕಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಎತ್ತಿನ ಓಟದ ಸ್ಪರ್ಧೆ ನಡೆಯಿತು. ಎತ್ತುಗಳ ಕೋಡಿಗೆ ಬಣ್ಣ ಬಳಿದು, ನೂಲಿನ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಯಿತು. ನಂತರ ಎತ್ತುಗಳನ್ನು ಸಾಲಾಗಿ ನಿಲ್ಲಿಸಿ, ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಮಲಪನಗುಡಿಯ ಮುಖ್ಯರಸ್ತೆಯಲ್ಲೇ ಓಟದ ಸ್ಪರ್ಧೆ ನಡೆಯಿತು. ಎತ್ತುಗಳೊಂದಿಗೆ ಅದರ ಮಾಲೀಕರೂ ಓಡಿದರು. ಇದನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಗ್ರಾಮಸ್ಥರು ನೆರೆದಿದ್ದರು.